About the Author

ಲೇಖಕ ಶಿವಕುಮಾರ ಕಟ್ಟೆ ಅವರು ಮೂಲತಃ ಬೀದರ ಜಿಲ್ಲೆಯ ಔರಾದ್ ತಾಲೂಕಿನವರು. ನ್ಯಾಯಾಂಗ ಇಲಾಖೆ, ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡಿ ಸದ್ಯ ಬೀದರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ತಾವು ವಿದ್ಯಾರ್ಥಿ ಆಗಿದ್ದಾಗಲೇ ಅವರು ‘ನೆನಪು’ ಕವನ ಸಂಕಲನ ಪ್ರಕಟಿಸಿದ್ದರು. 

ಕೃತಿಗಳು: ಅಂತಃಪುರ, ಕನ್ನಡ ಡಿಂ ಡಿಂ, ಔರಾದ ತಾಲೂಕು ದರ್ಶನ, ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳು ಪ್ರಕಟವಾಗಿವೆ. ನಾಲ್ದೇರಾ ಎಂಬ ಪ್ರವಾಸ ಕಥನ ಪ್ರಕಟಗೊಂಡಿದೆ.

2014ರಲ್ಲಿ ಔರಾದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು, 2019ರಲ್ಲಿ ಮಂದಾರ ಕಲಾವಿದರ ವೇದಿಕೆಯ ರಾಜ್ಯಮಟ್ಟದ ರಜತ ಕವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಧರಿನಾಡ ಸಿರಿ, ಕವಿಭಾರ್ಗವ ಪ್ರಶಸ್ತಿಗಳ ಪುರಸ್ಕೃತರು. 

ಶಿವಕುಮಾರ ಕಟ್ಟೆ

(01 Aug 1971)