About the Author

ಶಿವಕುಮಾರ ಮೋ ಕರನಂದಿ ಅವರು ಬಾಗಲಕೋಟೆ ಜಿಲ್ಲೆಯ ಕಾಕನೂರು ಬಳಿಯ ರಾಮದುರ್ಗದಲ್ಲಿ 07-02-1991 ರಂದು ಜನಿಸಿದರು. ತಂದೆ ದಿ. ರಾಚಪ್ಪ ಗು ಕರನಂದಿ.ರಂಗಶಿಲ್ಪಿಗಳಾಗಿದ್ದರು. ಶಿಕ್ಷಣವನ್ನು ಗುಳೇದಗುಡ್ಡ, ಬಾಗಲಕೋಟೆ ಯಲ್ಲಿ ಮಾಡಿ ಸಧ್ಯ ಇವರು ಗುಳೇದಗುಡ್ಡ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಗುಳೇದಗುಡ್ಡದಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಾಗಿದ್ದಾರೆ.

ಕವಿತೆ, ಭಾವಗೀತೆ,ಗಜಲ್, ಕಥೆ, ಲೇಖನ ಬರೆಯುತ್ತಾರೆ. ಇವರ ಚೊಚ್ಚಲ ಕೃತಿ 'ಮೌನ ಮಾತಾದಾಗ' ಕವನಸಂಕಲನ ವೂ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಯೋಜನೆಯಲ್ಲಿ ಆಯ್ಕೆಯಾಗಿದೆ.  ಸಲಾಂ ಏ ಗಾಲಿಬ್ ಎಂಬ ಗಜಲ್ ಸಂಪಾದಿತ ಕೃತಿ. ನಾಡಿನ ಒಟ್ಟು 41 ಗಜಲ್ ಕವಿಗಳ ಗಜಲ್ಗಳಿವೆ. ಇವರು ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದ ಸದಸ್ಯರು. ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷರಾಗಿದ್ದಾರೆ.

ಶಿವಕುಮಾರ ಮೋ ಕರನಂದಿ

(07 Feb 1991)