About the Author

ಶಿವನಾಯಕದೊರೆ ಹುಲಿಹೈದರ ಮೂಲತಃ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ `ಹುಲಿಹೈದರ'ದವರು. ಪಿಯುಸಿ ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯತ್ತ ಆಸಕ್ತಿ ಹೊಂದಿದ ಅವರು ನೀನಾಸಂ ಪದವಿ ಪಡೆದು, ಒಂದು ವರ್ಷ ಸುವರ್ಣವಾಹಿನಿಯ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 2008ರಲ್ಲಿ ಸರ್ಕಾರದಿಂದ ನಾಟಕ ಶಿಕ್ಷಕರಾಗಿ ಆಯ್ಕೆಯಾಗಿ, ಈಗ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿಯ ಜೊತೆಗೆ ಕತೆ, ನಾಟಕ, ಕಾದಂಬರಿಗಳನ್ನು ಬರೆದಿದ್ದಾರೆ. “ಮುತ್ತುರಾಜನ ವಿಜಯ” ಇವರ ಮೊದಲ ಕೃತಿ . ಪ್ರಸ್ತುತ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ವಾಸವಾಗಿದ್ದಾರೆ.

ಕೃತಿಗಳು: ಮುತ್ತುರಾಜನ ವಿಜಯ

ಶಿವನಾಯಕದೊರೆ ಹುಲಿಹೈದರ

(06 Jan 1973)