About the Author

ಸೂತ್ರದಾರ ರಾಮಯ್ಯ ಅವರು ಮೂಲತಃ ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯವರು. ಬಿ.ಎಸ್.ಸ್ಸಿ, ಎಲ್.ಎಲ್.ಬಿ ಪದವೀಧರರು. ವಿಮಾ ಇಲಾಖೆಯಲ್ಲಿ  ವೃತ್ತಿ ಜೀವನ ಆರಂಭಿಸಿದರು. ಪ್ರಸ್ತುತ ವಕೀಲಿ ವೃತ್ತಿಯಲ್ಲಿದ್ದಾರೆ. ‘ಸಂಧ್ಯಾಕಾಲ’ ನಾಟಕದ ಮುಖೇನ ರಂಗಭೂಮಿ ಪ್ರವೇಶಿಸಿದರು. ಈಡಿಪಸ್, ಚೋಮ, ಆಸ್ಪೋಟ, ಕಫನ್, ಕಾಮಗಾರಿ, ದೊಡ್ಡಪ್ಪ, ರಣಹದ್ದು, ಕತ್ತಲೆ ಬೆಳಕು, ಹುತ್ತದಲ್ಲಿ ಹುತ್ತ, ಜೈಸಿದ ನಾಯಕ, ತೆರೆಗಳು, ಸೀತಾಪಹರಣ, ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. 

ಕೃತಿಗಳು : ಮೆಟ್ಟಿಲ ಮಹಿಮೆ

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ನಾಟಕ ಅಕಾಡೆಮಿಯಿಂದ 2000ರ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ. 

ಸೂತ್ರದಾರ ರಾಮಯ್ಯ