About the Author

ಪತ್ರಕರ್ತ, ಲೇಖಕ ಸುಭಾಷ ಬಣಗಾರ ಅವರು 1970 ಜೂನ್ 01 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರುಕ್ಮಾಪುರದಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ‘ಈ ಸಂಭಾಷಣೆ, ಬಯಲು ಗ್ರಂಥಾಲಯ, ಸಂಯುಕ್ತ ಬರಹ’ ಹಾಗೂ ‘ಮಾಧ್ಯಮ ವರ್ಗ’-ಇವು ಅವರ ಕೃತಿಗಳು. ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕಲಬುರಗಿ ಮೀಡಿಯಾ ಟ್ರಸ್ಟ್ ಪ್ರಶಸ್ತಿ, ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’ ಮುಂತಾದವುಗಳಿಗೆ ಭಾಜನರಾಗಿದ್ಧಾರೆ.

ಸದ್ಯ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಸುಭಾಷ ಬಣಗಾರ

(01 Jun 1970)