About the Author

ಸುಲಕ್ಷಣಾ ಶಿವಪೂರ ಅವರು ಮೂಲತಃ ಹುಬ್ಬಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವಿತೆ, ಕತೆ ಹಾಗೂ ಪ್ರವಾಸ ಕಥನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಸ್ಥಳೀಯ ಸಾಹಿತ್ಯ ಸಮ್ಮೇಳನ ಹಾಗೂ ಇತರೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನವಾಚನ ಮಾಡಿದ್ದಾರೆ. ಧಾರವಾಡದ ‘ಕರ್ನಾಟಕ ಬಾಲ ವಿಕಾಸ ಅಕಾಡೆಮಿ' ವತಿಯಿಂದ ‘ಶಾಲಾ ಮಕ್ಕಳ  ಆರೊಗ್ಯ ಹಾಗೂ ಆಹಾರ’ ವಿಷಯದ ಕುರಿತು ಸಂಶೋಧನೆ ಮಾಡಿರುತ್ತಾರೆ. ಸ್ಟಾರ್ ಸುವರ್ಣ ನಡೆಸಿದ ಕನ್ನಡದ ಕೋಟ್ಯಾಧಿಪತಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿರುವ ಅವರು ಹಿಂದಿ ಸಾಹಿತ್ಯದಲ್ಲಿ ಸುಮಾರು 500ಕ್ಕೂ  ಹೆಚ್ಚು ಶಾಯರಿಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅವರಿಗೆ ವಿವಿಧ ಸಂಸ್ಥೆ, ಸಂಘಟನೆಗಳ ವತಿಯಿಂದ ಸನ್ಮಾನಗಳನ್ನು ಪಡೆದಿರುತ್ತಾರೆ. 

ಕೃತಿಗಳು : ಅಂತರಂಗದ ಅಲೆಗಳು(2007 ಕವನ ಸಂಕಲನ), ಬಾಳುವಂತ ಹೂವೆ( ಕಾದಂಬರಿ), ಭಾವಬಿತ್ತಿದ ಅಕ್ಷರಗಳು (ಕವನ ಸಂಕಲನ)

ಪ್ರಶಸ್ತಿ : ಪ್ರೊ.ಎಚ್.ಸ್.ಕೆ ನೆನಪಿನ ರಾಜ್ಯಮಟ್ಟದ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಟಾನ ಕಾವ್ಯ ಪ್ರಶಸ್ತಿ (ಅಂತರಂಗದ ಅಲೆಗಳು), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ವಿದ್ಯಾ ವಿಭೂಷಣ ಪ್ರಶಸ್ತಿ, ಹೆಮ್ಮೆಯ ಕನ್ನಡತಿ.

 

 

 
 


 

.

 
 
 

                                                                                                                                                

ಸುಲಕ್ಷಣಾ ಶಿವಪೂರ