About the Author

ಲೇಖಕಿ ಸುಮಾ ಚಂದ್ರಶೇಖರ್‌ ಅವರು (ಜನನ: 1988 ಮೇ 30)  ಬೆಂಗಳೂರಿನವರು.  ತಂದೆ - ರಮೇಶ ಸಿ. ಜಿ. ಸಮೂಹ ಸಂವಹನ & ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಅಮರ ಬಾಪು ಚಿಂತನ ಪತ್ರಿಕೆಯಲ್ಲಿ ಉಪ ಸಂಪಾದಕರು.

‘ಸತ್ಯ ಪಥದ ನಿತ್ಯ ಸಂತ’ (ಗಾಂಧಿ ವ್ಯಕ್ತಿತ್ವ ದರ್ಶನ) ಅವರ ಕೃತಿ. ಕನ್ನಡ ಸಾಹಿತ್ಯ ಪರಿಷತ್ತಿನಿಂದ 2019ನೇ ಸಾಲಿನ ರಾಜ್ಯ ಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಲ್ಲಿ ಒಂದಾದ ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಗೆ ಈ ಕೃತಿ ಭಾಜನವಾಗಿದೆ. ಅವರಿಗೆ ಬಾ-ಬಾಪು 150ನೇ ವರ್ಷಾಚರಣೆಯ ಪ್ರಯುಕ್ತ ಬೆಂಗಳೂರಿನ ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಹಾ ಮಂಡಳಿಯಿಂದ ‘ಗಾಂಧಿಸ್ಮೃತಿ’ ಪುರಸ್ಕಾರ, ಕನ್ನಡ ಮಾಣಿಕ್ಯ ರತ್ನ ಪ್ರಶಸ್ತಿ, ಹವ್ಯಾಸಿ ಲೇಖಕಿಯಾಗಿ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಕುರಿತು ಲೇಖನಗಳು ಪ್ರಕಟಣೆಗೊಂಡಿವೆ.

ಸುಮಾ ಚಂದ್ರಶೇಖರ್

(30 May 1988)