About the Author

ಸುರೇಶ ಮೂಲತಃ ಬೆಂಗಳೂರಿನವರಾಗಿದ್ದು 25 ವರ್ಷಗಳಿಂದ ಸ್ವಂತ ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ನ್ಯೂಸ್ ಪೇಪರ್, ಟಿವಿ, ರೇಡಿಯೋ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ, ಅನೇಕ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಕರ್ಷಕ ಜಾಹೀರಾತುಗಳನ್ನು ಸೃಷ್ಟಿಸಿದ್ದಾರೆ. ವೇದಗಳ ವಿಚಾರಗಳನ್ನು ಇಂದಿನ ಜನಾಂಗಕ್ಕೆ ಅರ್ಥವಾಗುವ ಹಾಗೆ ಪರಿಚಯಿಸಲು 'ಹೊಸಬೆಳಕು' ಎಂಬ ಅತ್ಯಂತ ಪ್ರಚಲಿತ ಧಾರಾವಾಹಿಯನ್ನು ವೇದಾಧ್ಯಾಯಿ  ಸುಧಾಕರ ಶರ್ಮಾರವರೊಂದಿಗೆ ದೂರದರ್ಶನ ಚಂದನಕ್ಕಾಗಿ ಪರಿಕಲ್ಪಿಸಿ ನಿರ್ಮಿಸಿದ್ದಾರೆ. ಬರವಣಿಗೆ ಹೊಸ ಅಭ್ಯಾಸವಲ್ಲವಾದರೂ ಬರವಣಿಗೆಯನ್ನು ಪುಸ್ತಕ ಮಾಡುವ ಧೈರ್ಯ ಸಾಹಸ ಮಾಡಿದ್ದು ಇದೇ ಮೊದಲು.

ಕೃತಿಗಳು: ತೋಚಿದ್ದು ಗೀಚಿದ್ದು

ಸುರೇಶ. ಎಸ್‌