About the Author

ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯಕ್ಕೆ ಕೊಡುಗೆ ನೀಡುತ್ತಾ ಬಂದವರು ವನಮಾಲಾ ಸಂಪನ್ನಕುಮಾರ್. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. 1964 ಡಿಸೆಂಬರ್‌ 15 ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ತಂದೆ ಮಹಾಲಿಂಗ ಶೆಟ್ಟಿ, ತಾಯಿ ಸಂಜೀವಿ ಎಂ. ಶೆಟ್ಟಿ. ವಾಸಂತಿ ಪಡುಕೋಣೆ (ಜೀವನ ಚರಿತ್ರೆ) (ಸಂಪಾದನೆ), ಗರಿಕೆ (ಉದಯೋನ್ಮುಖರ ಕವಿತೆಗಳು) ಪ್ರಕಟಗೊಂಡಿವೆ. 

ನಮ್ಮ ಬದುಕಿನ ಪುಟಗಳು, ನಮ್ಮ ಬದುಕು ನಮ್ಮ ಬರಹ (ಲೇಖಕಿಯರ ಆತ್ಮ ಕಥಾನಕಗಳು) ಕೃತಿಗಳನ್ನು ರಚಿಸಿದ್ದಾರೆ. ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷೆ ಹುದ್ದೆ, ಬೆಂಗಳೂರು ಬಂಟರ ಸಂಘದ ಸ್ನೇಹ ಚಿಂತನ ಮಾಸಿಕದ ಸಂಪಾದಕ ಮಂಡಳಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.  

 

ವನಮಾಲಾ ಸಂಪನ್ನಕುಮಾರ್