ಲೇಖಕಿ ವೆಂಕಮ್ಮ ಎನ್.ಡಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ 01-07-1952 ರಂದು ಜನಿಸಿದರು. ತಂದೆ ಎನ್. ದುರುಗಪ್ಪ, ತಾಯಿ- ಎನ್. ವೀರಮ್ಮ.
ಕೃತಿಗಳು: ಭೀಮ ಸಂದೇಶ (ಕಾವ್ಯ), ಬಯಲೇ ಸಂಗಾತಿ (ಕಾವ್ಯ) , ವಿಕೃತ ಮನಗಳು (ಕಾದಂಬರಿ) ರಚಿಸಿದ್ದಾರೆ. ಇವರಿಗೆ ಅಂಬೇಡ್ಕರ್ ಫೆಲೋಷಿಪ್ (2006) , ಕೇಂದ್ರ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.