About the Author

ಕತೆಗಾರ್ತಿ ವಿಜಯಾ ಸುಬ್ರಮಣ್ಯ ಅವರು ಕಾಸರಗೋಡಿನ ಪೆರಡಾಲದಲ್ಲಿ ಜನಿಸಿದರು. ‘ಜಾನಪದ ಗೀತೆಗಳು’ ಅವರ ಕಥಾ ಸಂಕಲನ. ‘ಹೊಂಗಿರಣ, ಹತ್ತೆಸಳು, ಪುರಾಣ ಪುನೀತೆಯರು, ಇಷ್ಟಾರ್ಥಪ್ರದ ವಿಷ್ಣು ನಾಮಾವಳಿ, ಪುರಾಣಪುರುಷ ರತ್ನಗಳು’ ಅವರ ಮತ್ತಿತರ ಕೃತಿಗಳು. ಅವರಿಗೆ ‘ಗಂಗೊಳ್ಳಿ ಸಾರಕ ದತ್ತಿನಿಧಿ ಪುರಸ್ಕಾರ, ಕೊಡಗಿನ ಗೌರಮ್ಮ ಪ್ರಶಸ್ತಿ, ಶ್ರೀಮತಿ ಜಯಲಕ್ಷಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ಬಹುಮಾನ’ ಲಭಿಸಿದೆ. ಕೊಡಗಿನ ಗೌರಮ್ಮ ದತ್ತಿನಿಧಿ ಸಂಚಾಲಕಿ, ಅಂಕಣಕಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿಜಯಾ ಸುಬ್ರಮಣ್ಯ

(28 Aug 1949)