About the Author

ಲೇಖಕ ವಿಕ್ರಂ ಕಾಂತಿಕೆರೆ ಅವರು ಕಾಸರಗೋಡು ಜಿಲ್ಲೆಯ ಕೂಡ್ಲು-ರಾಮದಾಸ ನಗರ ವ್ಯಾಪ್ತಿಯ ಕಾಂತಿಕೆರೆಯವರು. ಕೂಡ್ಲುವಿನಲ್ಲಿ ಪ್ರೌಢಶಿಕ್ಷಣ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಡಿಸಿ (ಪ್ರಿ-ಡಿಗ್ರಿ ಕೋರ್ಸ್), ಪದವಿ ಮತ್ತು ಸ್ನಾತಕೋತ್ತರ ಪದವಿ. ಅದೇ ಕಾಲೇಜಿನ ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರದಲ್ಲಿ ‘ಕನ್ನಡ ಮತ್ತು ಮಲಯಾಳಂನ ಮೊದಲ ಘಟ್ಟದ ಕಾದಂಬರಿಗಳು.’ ವಿಷಯವಾಗಿ  ಎಂ.ಫಿಲ್ ಪಡೆದರು. ಪತ್ರಿಕೋದ್ಯಮದ ವಿವಿಧ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ ಅನುಭವ ಇದೆ.

ಕೃತಿಗಳು: ಕಾವೇರಿ ತೀರದ ಪಯಣ (ಅನುವಾದಿತ ಕೃತಿ)

ಪ್ರಶಸ್ತಿ-ಪುರಸ್ಕಾರಗಳು: ಮಾಧ್ಯಮ ಅಕಾಡೆಮಿ, ಚರಕ, ರಾಜ್ಯ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮೈಸೂರಿನ ರೋಟರಿ ಮಿಡ್ ಟೌನ್ ಸಂಸ್ಥೆಯ ಪ್ರಶಸ್ತಿಗಳು ಸಂದಿವೆ. 

ವಿಕ್ರಂ ಕಾಂತಿಕೆರೆ