About the Author

ವಿನೋದ ಆರ್. ಪಾಟೀಲ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ (ಜನನ: 01-06-1984) ಗ್ರಾಮದವರು.  ಬಿ.ಎ. ಡಿ.ಇಡಿ. ಪದವೀಧರರು. ಸದ್ಯ ಸವದತ್ತಿ ತಾಲೂಕ ಶ್ರೀರಂಗಪೂರದ ಶಾಲಾ ಸಹ ಶಿಕ್ಷಕರು. ಬೆಳಗಾವಿ ಜಿಲ್ಲಾ ವಿಜ್ಞಾನ ಪರಿಷತ್ತಿನ ಸಹಕಾರ್ಯದರ್ಶಿಗಳು. ಧಾರವಾಡ ಕೃಷಿ ಮಾಧ್ಯಮ ಕೇಂದ್ರದಿಂದ ಗ್ರಾಮೀಣ ಪತ್ರಿಕೋದ್ಯಮ (2010-11) ತರಬೇತಿ ಪಡೆದಿದ್ದು, ಇವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಕೃಷಿಯಿಂದ ಬದುಕು ಕಟ್ಟಿಕೊಂಡ ಶಂಕರ ಲಂಗಟಿ ಮತ್ತು ಗುಂಡೇನಟ್ಟಿ ಗ್ರಾಮ’’ ಇವರ ಚೊಚ್ಚಲ ಕೃತಿ ಗ್ರಾಮೀಣ ಜೀವನ ಮತ್ತು ಪರಿಸರ ಕುರಿತು ಛಾಯಾಚಿತ್ರಗ್ರಹಣ ಇವರ ಹವ್ಯಾಸ. ಕಥೆಗಳು ಹಾಗೂ ಮಕ್ಕಳ ಕಥೆಗಳನ್ನುಬರೆದಿದ್ದಾರೆ. 2018ರ ರಾಜ್ಯಮಟ್ಟದ ಸಕೃತ ಕೃಷಿ ಲೇಖನ ಪ್ರಶಸ್ತಿ ಲಭಿಸಿದೆ. 

ವಿನೋದ ಆರ್. ಪಾಟೀಲ

(01 Jun 1984)