About the Author

ಬಂಟ್ವಾಳ ತಾಲೂಕಿನ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ. ವಿಶ್ವೇಶ್ವರ ವಿ.ಕೆ. ಅವರು ಮೂಲತಃ ಅಡ್ಯನಡ್ಕದವರು. ಮೈಸೂರು ಸರಕಾರಿ ವೈದ್ಯಕೀಲರು ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್ ಪದವೀಧರರಾಗಿರುವ ಅವರಿಗೆ ವೈದ್ಯಕೀಯದಷ್ಟೇ ಸಾಹಿತ್ಯಾಸಕ್ತಿ ಕೂಡ. 'ಸ್ಮೃತಿ' (ಪ್ರಕಾಶನವೊಂದರ ಅಧ್ಯಯನ), 'ಹೂಗು ತೈಂದೆ' (ಹವ್ಯಕ ಭಾಷಾ ಕವನ ಸಂಗ್ರಹ), 'ನಾವಿಕ' (ವಿ. ಗ, ನಾಯಕ ಅಭಿನಂದನ) ಗ್ರಂಥಗಳನ್ನು ಸಂಪಾದಿಸಿರುವ ಅವರ ಕತೆ, ಕವನ, ವೈದ್ಯಕೀಯ ಲೇಖನಗಳು ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ವಿಶ್ವೇಶ್ವರ ವಿ. ಕೆ.