ಸಾಹಿತ್ಯ ಮತ್ತು ಜೀವನಕಲೆ

Author : ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ

Pages 168

₹ 150.00




Year of Publication: 2022
Published by: ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್
Address: ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್, 93/1, ಕೇಶವಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560004, ಉಮಾ ಥಿಯೇಟರ್ ಹತ್ತಿರ, ಚಾಮರಾಜಪೇಟೆ
Phone: 9448284602, 080-26612730, 080-26612731

Synopsys

ಭಾಷೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಗಣ್ಯರೆನಿಸಿದ್ದ ರಾಳದಲ್ಲಿ ಆನಂತ ಕೃಷ್ಣಶರ್ಮರು ಸಂಸ್ಕೃತಿ ವಿಷಯವಾಗಿ ನಡೆಸಿದ ಕೈಂಕರ್ಯ, ನೀಡಿದ ಕೊಡುಗೆ ಬಹಳ ದೊಡ್ಡದು. ತಮ್ಮ ಹಲವು ರೀತಿಯ ಚಟುವಟಿಕೆಗಳ ಮೂಲಕ ಭಾವಜಗತ್ತನ್ನು ಉನ್ನತೀಕರಿಸಲು, ತನ್ಮೂಲಕ ಬದುಕನ್ನು ಸಮೃದ್ಧಗೊಳಿಸಲು ಶ್ರಮಿಸಿದವರು. ಅವರು, 'ಸಾಹಿತ್ಯ ಮತ್ತು ಜೀವನ ಕಲೆ' ಕೃತಿಯಲ್ಲಿ ಸಂಕಲಿಸಲ್ಪಟ್ಟಿರುವ ಅವರ ಭಾಷಣಗಳು, ಲೇಖನಗಳ ಆಶಯವೂ ಇದೇ ಆಗಿದೆ. ಈ ಕೃತಿಯ ‘ಮರು ಓದು’ ನಮ್ಮ ದೃಷ್ಟಿಯನ್ನೂ ಧೋರಣೆಯನ್ನೂ ನೇರ್ಪುಗೊಳಿಸಿಕೋಳ್ಳುವುದಕ್ಕೆ ಸಹಕಾರಿಯಾದೀತು.

About the Author

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ
(23 January 1893)

ತ್ರಿಭಾಷಾ ಪಂಡಿತ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮ ಅವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ರಾಳ್ಳಪಳ್ಳಿಯಲ್ಲಿ. ಸಂಸ್ಕೃತ, ಕನ್ನಡ, ತೆಲುಗು ಭಾಷಾ ಪಂಡಿತರು. ಸಂಗೀತ ತಜ್ಞರು. ತಂದೆ- ಕೃಷ್ಣಮಾಚಾರ್ಯರು  ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆ ಮತ್ತು ಪರಕಾಲ ಮಠದ ಶ್ರೀಕೃಷ್ಣಬ್ರಹ್ಮತಂತ್ರಿ ಯತೀಂದ್ರರಲ್ಲಿ ವ್ಯಾಕರಣ ಮತ್ತು ಅಲಂಕಾರ ಶಾಸ್ತ್ರ  ವ್ಯಾಸಂಗ ಮಾಡಿದರು.  ಕರಿಗಿರಿರಾಯರು, ಚಿಕ್ಕರಾಮರಾಯರು ಮತ್ತು ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದರು. 1912ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತೆಲುಗು ಅಧ್ಯಾಪಕರಾದರು. 1949ರಲ್ಲಿ ನಿವೃತ್ತಿ ಪಡೆದರು.  ತಿರುಪತಿ ಪ್ರಾಚ್ಯ ಸಂಶೋಧನಾಲಯದಲ್ಲಿ ರೀಡರ್ ಹುದ್ದೆಗೆ ಸೇರಿ, ತಾಳ್ಳಪಾಕ ಕವಿಗಳ ಗೇಯ ರಚನೆಗಳ ಸಂಶೋಧನೆಯ ಮೂಲಕ ತಾಳ್ಳಪಾಕ ಪಾಟಲು ...

READ MORE

Related Books