ವೆಂಕಟಾಚಲಪತಿ

Author : ಕೆ.ವಿ. ಸುಬ್ರಹ್ಮಣ್ಯಂ

Pages 96

₹ 70.00




Year of Publication: 2014
Published by: ಶಿಲ್ಪಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಕರ್ನಾಟಕ ಹೆಸರಾಂತ ಕಲಾವಿದ ವೆಂಕಟಾಚಲಪತಿ. ಭಾವ ಶಿಲ್ಪ ಮತ್ತು ಸಮಕಾಲೀನ ಶಿಲ್ಪಗಳ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ’ಚಲಪತಿ’ ಅವರ ಕಲೆ ಮತ್ತು ಜೀವನವನ್ನು ಪರಿಚಯಿಸುವ ಕೃತಿಯಿದು.

ಕಲಾಮಂದಿರದ ಅ.ನ. ಸುಬ್ಬರಾಯರಿಗೆ ಕಾರ್ಡು ಬರೆದ ಬಾಲಕನೊಬ್ಬ ಅದಕ್ಕೆ ಬಂದ ಮಾರುತ್ತರ ಹಿಡಿದು ಬಸ್ ಹತ್ತಿದ. ಹಾಗೆ ಬೆಂಗಳೂರಿಗೆ ಬಂದ ಹುಡುಗ ನಾಡಿನ ಹೆಸರಾಂತ ಶಿಲ್ಪಿಗಳ ಸಾಲಿನಲ್ಲಿ ಸೇರುತ್ತಾನೆ ಎಂದು ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ವೆಂಕಟಾಚಲ ಪತಿ ಅವರು ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಜಕ್ಕಣಾಚಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಲಪತಿ ಅವರ ಕಲಾಕೃತಿಗಳ ಮಹತ್ವವನ್ನು ಕಲಾವಿಮರ್ಶಕ ಕೆ.ವಿ. ಸುಬ್ರಹ್ಮಣ್ಯಂ ಅವರು ಸೊಗಸಾಗಿ ವಿವರಿಸಿದ್ದಾರೆ. 

About the Author

ಕೆ.ವಿ. ಸುಬ್ರಹ್ಮಣ್ಯಂ
(18 December 1949)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ...

READ MORE

Related Books