About the Author

ಹಿರಿಯ ಲೇಖಕ ಅಂಬ್ರಯ್ಯ ಮಠ ಅವರು ನಿವೃತ್ತ ಕರ್ನಾಟಕ ಪವರ್ ಕಾರ್ಪೋರೇಷನ್ ( ಕೆಪಿಸಿ)  ವ್ಯವಸ್ಥಾಪಕರು. ಶಿವಮೊಗ್ಗದ ಬಿದನೂರು ವಾಸಿ. ಜೂನ್ 1,1953ರಂದು ಜನಿಸಿದರು. ಅಂಕಣ ಸಂಕಲನ: ನಿಂತ ನೀರ ಕಲಕಬೇಡಿ, ಪರಮ ನೀಚನ ಹೆಜ್ಜೆ ಗುರುತು, ಬೆಳ್ಳಿ ಬೆಳಕಿಂಡಿ. ಪ್ರವಾಸಕಥನ: ಯೇಸು ನಡೆದಾಡಿದ ನಾಡಲ್ಲಿ. ಕಾದಂಬರಿ: ಬಿದನೂರು ರಾಣಿ ವೀರಮ್ಮಾಜಿ, ಅಹಲ್ಯೆ ಅಂತರಂಗ, ಅಂಬೆ, ಕೆಳಾದಿಕುಲತಿಲಕ ವೆಂಕಟಪ್ಪ ನಾಯಕ. ಒಕ್ಕೈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿನ ಜಿ. ಆರ್. ರೇಬವಯ್ಯ ದತ್ತಿ ಪ್ರಶಸ್ತಿ ದೊರೆತಿದೆ. ಒಂದೊಮ್ಮೆ ಜಾರಿದಾಗ ಸಣ್ಣಕಥೆಯು ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಭಾಷಾಂತರಗೊಂಡಿದೆ.  ಕೃತಿಗಳು: ಕೆಳದಿಯ ಕುಲತಿಲಕ ವೆಂಕಟಪ್ಪ ನಾಯಕ (ಸಂಶೋಧನಾ ಕೃತಿ), ಗತರಾಜಧಾನಿಯ ಸುತ್ತಮುತ್ತ ಹಾಗೂ ಐತಿಹಾಸಿಕ ಲೇಖನಗಳು.  

ಅಂಬ್ರಯ್ಯ ಮಠ