ಲೇಖಕ ಅಂಬ್ರಯ್ಯ ಮಠ ಅವರ ಪೌರಾಣಿಕ ಕಾದಂಬರಿ -ವೇದವ್ಯಾಸ. ಹಿಂದೂ ಧರ್ಮ ಹಾಗೂ ಪರಂಪರೆಯಲ್ಲಿ ವೇದವ್ಯಾಸರ ಹೆಸರು ಪ್ರಮುಖ. ಇವರನ್ನು ಬ್ರಹ್ಮರ್ಷಿ ಎಂದೂ ಕರೆಯಲಾಗುತ್ತಿದೆ. ಬ್ರಹ್ಮನನ್ನು ಸಂಪೂರ್ಣವಾಗಿ ತಿಳಿದವರು. ವ್ಯಾಸರು ಮಹಾಭಾರತವನ್ನು ರಚಿಸಿದವರು. ಇವರ ಬಣ್ಣ ಕಪ್ಪು ಇರುವುದರಿಂದ ಕೃಷ್ಣ ಎಂದೂ ದ್ವೀಪದಲ್ಲಿ ಜನಿಸಿದ್ದರಿಂದ ದ್ವೈಪಾಯನ ಎಂದೂ, ಒಟ್ಟಿಗೆ ಇವರನ್ನು ‘ಕೃಷ್ಣ-ದ್ವೈಪಾಯನ’ ಎಂದೂ ಕರೆಯಲಾಗುತ್ತದೆ. ಪುರಾಣಗಳಲ್ಲಿ ಇವರು ವಿಷ್ಣುವಿನ ಅವತಾರ ಎಂದೇ ಪ್ರಸಿದ್ಧಿ. ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು. ಇವರ ವೃತ್ತಾಂತವನ್ನು ಪುರಾಣಗಳಲ್ಲಿ ವಿವರಿಸಿದಂತೆ ಲೇಖಕರು ಕಾದಂಬರಿಯಾಗಿಸಿದ್ದು ವಿಶೇಷ.
ಹಿರಿಯ ಲೇಖಕ ಅಂಬ್ರಯ್ಯ ಮಠ ಅವರು ನಿವೃತ್ತ ಕರ್ನಾಟಕ ಪವರ್ ಕಾರ್ಪೋರೇಷನ್ ( ಕೆಪಿಸಿ) ವ್ಯವಸ್ಥಾಪಕರು. ಶಿವಮೊಗ್ಗದ ಬಿದನೂರು ವಾಸಿ. ಕೃತಿಗಳು: ಕೆಳದಿಯ ಕುಲತಿಲಕ ವೆಂಕಟಪ್ಪ ನಾಯಕ (ಸಂಶೋಧನಾ ಕೃತಿ), ಗತರಾಜಧಾನಿಯ ಸುತ್ತಮುತ್ತ ಹಾಗೂ ಐತಿಹಾಸಿಕ ಲೇಖನಗಳು, ...
READ MORE