About the Author

ಸಾಹಿತಿ ಆನಂದ ಕೆ. ಪೂಜಾರ ಅವರು ಮೂಲತಃ ಬಾಗಲಕೋಟೆಯವರು. ಐತಿಹಾಸಿಕ ಬಾದಾಮಿ ಪರಿಚಯ ಕೃತಿಯನ್ನು ಬರೆದು ಪ್ರಕಟಿಸಿದ್ದಾರೆ. ಇವರ ಲೇಖನಗಳು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ ಮತ್ತು ವಿಜಯ ಕರ್ನಾಟಕ ದೈನಿಕಗಳಲ್ಲಿ ಪ್ರಕಟವಾಗಿವೆ. ಕಥಾ ಕಮ್ಮಟ, ಕವಿಗೋಷ್ಠಿ ಹಾಗೂ ವಿಶ್ವವಿದ್ಯಾಲಯ ಉಪನ್ಯಾಸ ಮಾಲೆಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ವಿಜ್ಞಾನ ಪರಿಷತ್ತು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಗಳ ಆಜೀವ ಸದಸ್ಯರಾಗಿದು ಇವರ ಸಾಹಿತ್ಯದೊಲವಿಗೆ ಸಾಕ್ಷಿ. ‘ಬೆಳವಲದ ಭವ್ಯ ಜಾತ್ರೆ, ಶ್ರೀಬನಶಂಕರಿ ದೇವಿ ಜಾತ್ರೆ, ರಕ್ಷಾ ಬಂಧನದ ಮಹತ್ವ, ಮಧುರ ಶಹನಾಯಿ ವಾದಕ-, ನವರಾತ್ರಿ ಹಿನ್ನೆಲೆ , ಭಕ್ತರ ಸಡಗರದ ಜಾತ್ರೆ, ಶ್ರೀ ಬನಶಂಕರಿ ದೇವಿ ಜಾತ್ರೆ, ಚಾಲುಕ್ಯರ ಶಿಲ್ಪಕಲೆ, ಬನದ ಮಡಿಲಲ್ಲಿ ಶ್ರೀ ಬನಶಂಕರಿ ದೇವೀ ಜಾತ್ರೆ’ ಅವರ ಪ್ರಕಟಿತ ಲೇಖನಗಳು.

ಆನಂದ ಕೆ. ಪೂಜಾರ

(01 Oct 1959)