About the Author

ಅನೀಶ್ ಬಿ. ಕೊಪ್ಪ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಹುಟ್ಟಿದ್ದು 2005 ಡಿಸೆಂಬರ್‌ 22 ರಂದು ಕೊಪ್ಪದಲ್ಲಿ. ಶಿವಮೊಗ್ಗದ ಸೃಜನ ಟ್ರಸ್ಟ್ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಪ್ಪಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದ ಕವನ ವಿಭಾಗದಲ್ಲಿ ಸ್ವರಚಿತ ಕವನಕ್ಕೆ  ಪ್ರಥಮ ಸ್ಥಾನ ಪಡೆದಿದ್ದಾರೆ. ಹೂರಣ-ಎಂಬುದು ಅವರ ಮೊದಲ ಕವನ ಸಂಕಲನ. 

2018 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕ್ಷೇತ್ರದ ಅಸಾಧಾರಣ ಪ್ರತಿಭೆ ಪುರಸ್ಕಾರ, 2018ರಲ್ಲಿ ವಿಜಯ ಕರ್ನಾಟಕ - ಹಾರ್ಲಿಕ್ಸ್ ಜ್ಯೂನಿಯರ್ ಸಾಧಕರು ಪುರಸ್ಕಾರ, ಚಿಕ್ಕಮಗಳೂರು ಜಿಲ್ಲಾ ಕಲಾಶ್ರೀ ಪ್ರಶಸ್ತಿ, ಸಿರಿಗನ್ನಡ ರಾಷ್ಟ್ರೀಯ ಶ್ರೇಷ್ಠ - ಬಾಲ ಕಲಾ ರತ್ನ ಪ್ರಶಸ್ತಿಗಳು ಲಭಿಸಿವೆ. 

ಅನೀಶ್ ಬಿ. ಕೊಪ್ಪ

(22 Dec 2005)