About the Author

ಲೇಖಕಿ ಆರತಿ ಘಟಿಕಾರ್ ಮೂಲತಃ ಬೆಳಗಾವಿ ಜಿಲ್ಲೆಯವರು. ಸಾಹಿತ್ಯಾಸಕ್ತರಾದ ಆರತಿ ಅವರು ಹಾಸ್ಯ ಲೇಖನ, ಲಲಿತ ಪ್ರಬಂಧ, ಹನಿಗವನ, ಕವನಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅವರ ಹಲವು ಲೇಖನ, ಹಾಸ್ಯ ಬರಹಗಳು ಕನ್ನಡದ ಪ್ರಮುಖ ದಿನ ಪತ್ರಿಕೆ, ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. "ಹನಿ ಹನಿ ಚಿತ್ತಾರ "ಹಾಗು ಭಾವದ ಹಕ್ಕಿ ಎಂಬ ಹನಿಗವನ ಸಂಕಲನಗಳು ಹಾಗೂ “ಮಾತ್ರೆ ದೇವೋ ಭವ “ ಮತ್ತು " ವಠಾರ ಮೀಮಾಂಸೆ " ಎಂಬ ಹಾಸ್ಯ ಲೇಖನ ಸಂಕಲನ ಹಾಗೂ ಲಲಿತ ಪ್ರಬಂಧ ಸಂಕಲನಗಳು ಬಿಡುಗಡೆಯಾಗಿವೆ . " ಮಾತ್ರೆ ದೇವೋ ಭವ " ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ನುಗ್ಗೇಹಳ್ಳಿ ದತ್ತಿ ನಿಧಿ ಪ್ರಶಸ್ತಿ," ಭಾವದ ಹಕ್ಕಿ " ಹನಿಗವನ ಸಂಕಲನಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ನಿಧಿ ಪ್ರಶಸ್ತಿ ಬಂದಿವೆ .

ಆರತಿ ಘಟಿಕಾರ್