About the Author

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಆರಂಭದ ವಿದ್ಯಾಭ್ಯಾಸ ಪಡೆದರು.  ನಂತರ ಸಾಗರದಲ್ಲಿನ ಲಾಲ್ ಬಹದೂರ್ ವಿಜ್ಞಾನ, ಕಲಾ ಮತ್ತು ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನಲ್ಲಿ ವಿಜ್ಞಾನ ಪದವಿ. ಕೆಲವು ಕಾಲ ರೈಲ್ವೇಯಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್ ಕೆಲಸ ಮಾಡಿದರು. ಮನಸ್ಸಿಗೆ ಒಗ್ಗದ ಆ ಕೆಲಸ ಬಿಟ್ಟು ಪತ್ರಿಕೋದ್ಯಮದತ್ತ ಹೊರಳಿದರು. ತೀರ್ಥಹಳ್ಳಿಯ 'ಛಲಗಾರ' ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.  ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರನಾಗಿ 1980ರಲ್ಲಿ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಅದೇ ಪತ್ರಿಕೆಯ ಕರ್ನಾಟಕ ಸ್ಥಾನಿಕ ಸಂಪಾದಕನಾಗಿ ಕೆಲಸ ಮಾಡಿ 2012ರಲ್ಲಿ ನಿವೃತ್ತರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಇವರ ಸಣ್ಣ ಕತೆಗಳು ಪ್ರಕಟವಾಗಿವೆ.

ಅರುಣ್ ಬೆನಕ