About the Author

ಲೇಖಕಿ ಅಶ್ವಿನಿ ರಾಮಾನುಜಂ ಅವರು ಆಪ್ತಸಲಹಾ ಮನಶಾಸ್ತೃಜ್ಞೆ. ಇವರು ಮೂಲತಃ ಬೆಂಗಳೂರಿನವರು. ತಂದೆ ಮನೋಹರನ್  ತಾಯಿ ಬೃಂದಾ ಮನೋಹರನ್. ಬೆಂಗಳೂರು ವಿಶ್ವವಿದ್ಯಾಲಯದಿಂದ ಕೌನ್ಸೆಲಿಂಗ್ ಸೈಕಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆ. ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನ ಬಸವನಗುಡಿಯ ಪ್ರಸನ್ನ ಕೌನ್ಸೆಲಿಂಗ್ ಸೆಂಟರ್ ನಲ್ಲಿ ಪ್ರಾಯೋಗಿಕ ಅನುಭವವಿದೆ. ಕಳೆದ 15 ವರ್ಷಗಳಿಂದ ಮಕ್ಕಳ, ಹದಿಹರೆಯದವರ ಕೌಟುಂಬಿಕ ಆಪ್ತಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರಹಗಾರ್ತಿ ಸಹ. ಅನೇಕ ಕಥೆ, ಕವನಗಳನ್ನು ರಚಿಸಿದ್ದಾರೆ. ಅನುಭವ ಮತ್ತು ಸಂಶೋಧನೆಯ ಆಧಾರದ ಮೇಲೆ, ಅನೇಕ ಮಾನಸಿಕ ಸಮಸ್ಯೆಗಳ ಮೂಲ ಮತ್ತು ಅದರಿಂದ ಹೊರಬರುವ ದಾರಿಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಕಥಾಸ್ವರೂಪ ನೀಡಿ, `ಕೌನ್ಸೆಲಿಂಗ ಕಥೆಗಳು' ಶೀರ್ಷಿಕೆಯಡಿ ಒಂದು ಕೃತಿಯನ್ನು ಬರೆದಿದ್ದಾರೆ.

ಅಶ್ವಿನಿ ರಾಮಾನುಜಂ