About the Author

ಬಿ.ಕೆ. ಬನ್ನಪ್ಪ ಅವರು ಯಾದಗಿರಿ ಜಿಲ್ಲೆಯ ಮಾಧ್ವರ ಗ್ರಾಮದವರು. ಗ್ರಂಥಪಾಲಕರಾಗಿ ನಿವೃತ್ತರು. 

ಕೃತಿಗಳು: ಐಎಎಸ್ ಅಧಿಕಾರಿ ಡಿ.ಕೆ ರವಿ, ಉತ್ತಮ ರಾಜಕಾರಣಿ ಯಾಗಬೇಕಾದರೆ...,,ಅರ್ಥ ಮಾಡಿಕೊಳ್ಳದ ಜೀವನ ವ್ಯರ್ಥ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?,ಭ್ರಷ್ಟಾಚಾರ ಭ್ರಷ್ಟಾಚಾರ.., ಸಮರ್ಥ ಮತ್ತು ಮಾದರಿ ನಾಯಕ ನರೇಂದ್ರ ಮೋದಿ, ಮೋದಿ ಅಲೆ ಏಕೆ, ಜೀವನ ಶಿಕ್ಷಣ ಹಾಗೂ ನೈತಿಕ ಶಿಕ್ಷಣ -ಹೀಗೆ ಒಂಬತ್ತು ಕೃತಿಗಳನ್ನು ಸಮರ್ಪಿಸಿದ್ದಾರೆ.

ಪ್ರಶಸ್ತಿ-ಪುರಸ್ಕೃತರು: 1981 ರ ಜನಗಣತಿ ಕಾರ್ಯದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ,ಸೇಡಂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನ್ನಡ ಕಣ್ಮಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಿ.ಕೆ. ಬನ್ನಪ್ಪ