About the Author

ಚಿಕ್ಕಮಗಳೂರಿನ ಚೋಳುಗುಡ್ಡೆಯವರಾದ ಲೇಖಕ ಬಿ.ಎಸ್. ಮಂಜುನಾಥಭಟ್ಟ ಅವರು ಜನಿಸಿದ್ದು 1929 ನವೆಂಬರ್ 25ರಂದು. ಉಪನ್ಯಾಸಕರಾಗಿ, ಸಂಸ್ಕೃತ ವಿದ್ವಾಂಸರಾಗಿ ಕಾರ್ಯ 

ನಿರ್ವಹಿಸಿ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 

25ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಇವರ ಪ್ರಮುಖ ಕೃತಿಗಳೆಂದರೆ ಜಯದೇವನ ಗೀತ ಗೋವಿಂದ, ಹಾಲನ ಗಾಥಾ ಸಪ್ತಶತಿ, ಅಶ್ವಘೋಷನ ಬುದ್ಧಚರಿತೆ, ಕಾಳಿದಾಸನ ರಘುವಂಶ, ವಿಕ್ರಮಾರ್ಯ ಮೋರ್ವಶೀಯ, ಮಾಲವಿಕಾಗ್ನಿಮಿತ್ರ, ಅಭಿಜ್ಞಾನ ಶಾಕುಂತಲ, ಪುರುಷೋತ್ತಮ, ಕವಿಯವಿಷ್ಣು ಭಕ್ತಿ ಕಲ್ಪಲತಾ ಮೊದಲಾದವು.

ಬಿ.ಎಸ್. ಮಂಜುನಾಥ ಭಟ್ಟ

(25 Nov 1929)