About the Author

ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸರಾದ ಡಾ. ಬಿ. ಶಿವರಾಮ ಶೆಟ್ಟಿ ಅವರು ಸಂಶೋಧಕರು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು. ಮೂಲತಃ  ಉಪ್ಪುನ ಬೋಳಾರದಾರ್ ದವರು. ತಂದೆ ಪುದಾರ್ ಚೆಂದಪ್ಪ ಶೆಟ್ಟಿ. ತಾಯಿ ಪುದಾರ್ ಸೇಸಮ್ಮ. ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಜೋಸೆಪ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದ ಅವರು ನಂತರ ಕಾಶಿ ಪ್ರೌಢಶಾಲೆ,  ಗಣಪತಿ ಜೂನಿಯರ್ ಕಾಲೇಜು, ಸರಕಾರಿ ಕಾಲೇಜು ಮಂಗಳೂರು, ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕೊತ್ತರ ಅಧ್ಯಯನ ಕೇಂದ್ರದಿಂದ ಎಂ.ಎ.ಕನ್ನಡ ಮಂಗಳೂರು ವಿಶ್ವವಿದ್ಯಾನಿಲಯದಿಂದ `ತುಳುನಾಡಿನ ಸಸ್ಯ ಜಾನಪದ’ ವಿಷಯದಲ್ಲಿ ಪಿ.ಎಚ್‍ಡಿ. ಪಡೆದರು. ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದರು. 2013-16 ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ಕುಪ್ಪಂ,ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ, ತುಮಕೂರು, ಹಂಪಿ,ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರಗಳ ಸದಸ್ಯರಾಗಿರುವ ಅವರು ಮೈಸೂರು, ಕುವೆಂಪು, ಹಂಪಿ, ಧಾರವಾಡ, ವಿಜಯಪುರ, ಕಣ್ಣೂರು, ಮಂಗಳೂರು ವಿಶ್ವವಿದ್ಯಾನಿಲಯಗಳ ಪರೀಕ್ಷಾಮಂಡಳಿಗಳ ಸದಸ್ಯರಾಗಿದ್ದಾರೆ.

 

ಬಿ. ಶಿವರಾಮ ಶೆಟ್ಟಿ