About the Author

ಬೆಳಗೋಡು ರಮೇಶ ಭಟ್ಟರು ವೃತ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರು, ಪ್ರವೃತ್ತಿಯಲ್ಲಿ ಒಬ್ಬ ಅಪರೂಪದ ಕತೆಗಾರ ಮತ್ತು ಕವಿ. 'ಜರಾಸಂಧ' (ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ - 1987), 'ಅಂಬಿಗನ ಹಂಗಿಲ್ಲ' (ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ - 2005) ಅವರು ಪ್ರಕಟಿಸಿರುವ ಕವನ ಸಂಗ್ರಹಗಳು. 'ಮನುಷ್ಯರನ್ನು ನಂಬಬಹುದು' (ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪುರಸ್ಕೃತ) ಎನ್ನುವ ಅವರ ಕಥಾಸಂಗ್ರಹ ಪ್ರಕಟವಾದ ಮೂರೇ ತಿಂಗಳಲ್ಲಿ ಮಾರಾಟವಾಗಿ ಆಶ್ಚರ್ಯ ಹುಟ್ಟಿಸಿದ ಕೃತಿ (2005). 'ಶ್ರೀಕೃಷ್ಣಾರ್ಪಣ' (ಬೈಕಾಡಿ ಕೃಷ್ಣಯ್ಯನವರ ಸಂಸ್ಮರಣೆ - 2006) ಮತ್ತು 'ನಾದ ಸುನಾದ' (ನಾದವೈಭವಂ ವಾಸುದೇವ ಭಟ್ಟರ ಅಭಿನಂದನ ಕೃತಿ - 2007) ಸಂಪಾದಿತ ಕೃತಿಗಳು.

ಬೆಳಗೋಡು ರಮೇಶ ಭಟ್