About the Author

ಚಂದ್ರಶೇಖರ್‌ ಬಂಡಿಯಪ್ಪ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಬಯೋಸೈನ್ಸ್) ಪದವೀಧರರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಇಡಿ. ಪದವೀಧರರು. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ(KANFIDA)ದಿಂದ ಫಿಲ್ಮ್‌ ಟೆಕ್ನಾಲಜಿಯಲ್ಲಿ  ಡಿಪ್ಲೊಮಾ ಪಡೆದಿದ್ದಾ‌ರೆ. ಕನ್ನಡದ ಖ್ಯಾತ ನಿರ್ದೇಶಕರಾದ ಎಸ್‌. ನಾರಾಯಣ್‌ ಹಾಗೂ ರಾಜೇಂದ್ರಸಿಂಗ್‌ ಬಾಬು ಅವರ ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ, ನಂತರ ತಾವೇ ಸ್ವತಂತ್ರ ನಿರ್ದೇಶಕರಾಗಿ, ಆನೆ ಪಟಾಕಿ, ರಥಾವರ, ಮತ್ತು ತಾರಾಕಾಸುರ, ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಸಿನಿಮಾಗಳಿಗೆ ಚಿತ್ರಕಥೆ ಬರೆಯುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತೋಡಗಿಸಿಕೊಂಡಿದ್ದಾರೆ. ‘ದೇವರ ಕಾಲೋನಿ’ ಇವರ ಮೊದಲ ಕಥಾ ಸಂಕಲನ.

ಚಂದ್ರಶೇಖರ್‌ ಬಂಡಿಯಪ್ಪ