About the Author

ಕವಯತ್ರಿ ಚಂಗಚಂಡ ರಶ್ಮಿ ನಿತಿನ್ ಅವರು ಮೂಲತಃ ಕೊಡಗು ಜಿಲ್ಲೆಯವರು. ಕುಶಾಲನಗರದ ನಂಜರಾಯ ಪಟ್ಟಣದ ಹೊಸಪಟ್ಟಣ ಗ್ರಾಮದಲ್ಲಿ ನೆಲೆಸಿದ್ದು, ಎಂ.ಕಾಂ. ಪದವೀಧರರು. ಕಂದದ :ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಹಾತೂರು  ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನಲ್ಲಿ ಪದವಿ ಹಾಗೂ ಸದ್ಯ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಕಥೆ, ಕವನ ಲೇಖನಗಳನ್ನು ಬರೆಯುವ ಹವ್ಯಾಸ. ರಕ್ತದಾನ, ಬೆಂಕಿ ಸುರಕ್ಷತೆಯ ಅರಿವು ಹೀಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. .

ಕೃತಿಗಳು: ಮಣ್ಣಿನ ಬಟ್ಟಲು (ಕವನ ಸಂಕಲನ)

ಗೌರವ ಸನ್ಮಾನ: ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಕಾವ್ಯ ಪ್ರತಿಭಾ ಪ್ರಶಸ್ತಿ , ಸಾಹಿತ್ಯ ರತ್ನ,  ಸಿರಿಗನ್ನಡ ಸೌರಭ , ಕರುನಾಡ ಚೇತನ ,ಮತ್ತು ಕಾವ್ಯ ಭೂಷಣ ಪ್ರಶಸ್ತಿ ಲಬಿಸಿವೆ. 

ಚಂಗಚಂಡ ರಶ್ಮಿ ನಿತಿನ್

(06 Mar 1988)