About the Author

ಲೇಖಕ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಶ್ರೀರಾಮನಹಳ್ಳಿಯವರು.ಎಂ.ಎ,ಎಂ.ಫಿಲ್ (ಆಂಗ್ಲ ಸಾಹಿತ್ಯ) ಪದವೀಧರರು. ಜನಪದ ಗಾಯಕ,  ರಂಗಭೂಮಿ ಕಲಾವಿದ ಮತ್ತು ‌ರಂಗ‌ನಿರ್ದೇಶಕರೂ ಆಗಿದ್ದಾರೆ.

ಕೃತಿಗಳು: ಅಂತಃಪುರ ( ಕವನ ಸಂಕಲನ-2010) ನೇಸರನ ಛಾಯೆ (ಕವನ ಸಂಕಲನ -2015), ಪಡುವಣ ದಿಕ್ಕಿನಲಿ (ನಾಟಕ-2016), ನಿರ್ದೇಶಿಸಿದ ನಾಟಕಗಳು; ತಮ್ಮದೇ ನಾಟಕ ಪಡುವಣ ದಿಕ್ಕಿನಲಿ, ನಾವು ನಾಗರೀಕರು -ಅಪ್ಪ ಅಂದರೆ ಆಲದ ಮರ-ಕಂಜೂಸ್ ಕರಿಯಪ್ಪ, ಚಂಪಾ ಅವರ ಅಪ್ಪ, ಡುಂಡಿರಾಜ್ ಅವರ ಹುಡುಕಾಟ- ಪರಮೇಶಿ ಪಜೀತಿ. ಅಭಿನಯಿಸಿದ ನಾಟಕಗಳು: ಪೌರಾಣಿಕ ನಾಟಕ, ಕುರುಕ್ಷೇತ್ರ, ಪೂರ್ಣಚಂದ್ರ ತೇಜಸ್ವಿ ಅವರ ಪರಿಸರ ಕತಾ ಪ್ರಸಂಗ ಹಾಗೂ ಮಾಯಾಲೋಕ, ಬಿಜಿಎಲ್ ಸ್ವಾಮಿ ಅವರ ಗಾರ್ದಭ ಪುರಾಣ.

ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ