About the Author

ಚಿರಂಜೀವಿ ರೋಡಕರ್ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಪೃವೃತ್ತಿಯಲ್ಲಿ ಬರಹಗಾರರು, ಸಾಹಿತಿಗಳು, ಸಂಘಟಕರು. 2010 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ರಾಯಚೂರು ಜಿಲ್ಲೆಯಲ್ಲಿ ಸೇವೆಗೆ ಸೇರಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಸ್ಕಿ ಘಟಕದ ನಿರ್ದೇಶಕರಾಗಿದ್ದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅದೇ ಪರಿಷತ್ತಿನ ಮೂರನೇ ರಾಜ್ಯ ಮಟ್ಟದ ಸಮ್ಮೇಳನವನ್ನು ಲಿಂಗಸಗೂರಿನಲ್ಲಿ ಆಯೋಜಿಸಿದ್ದರು. ವರ್ಗಾವಣೆಯಾಗಿ ಬಾಗಲಕೋಟ ಜಿಲ್ಲೆಯ ಬನಹಟ್ಟಿಗೆ ಬಂದು ಬಾಗಲಕೋಟ ಜಿಲ್ಲೆಯ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಮುಂದುವರೆದು ವೈಜ್ಞಾನಿಕತೆ ಪಸರಿಸುವಲ್ಲಿ ನಿರತರಾಗಿದ್ದಾರೆ . ಜೊತೆಗೆ ಮಾಸ ಪತ್ರಿಕೆಗಳಿಗೆ ಲೇಖನ ಬರೆದು ಕೃಷಿ ಕಾರ್ಯದಲ್ಲೂ ತೊಡಗಿದ್ದಾರೆ.

ಕವನ ಸಂಕಲನ: ಚಿರ ಕ್ರಾಂತಿ, ಕೊಡಲಿ ಕಾವು

 

 

ಚಿರಂಜೀವಿ ರೋಡಕರ್

(01 Jun 1988)