About the Author

ದರ್ಶಿನಿ ಪ್ರಸಾದ್ ಹುಟ್ಟೂರು ಸಕಲೇಶಪುರ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆ.‌ ಪತಿ ರಘು ಪ್ರಸಾದ್. ಸುಖಿ, ಸೃಷ್ಟಿ ಮಕ್ಕಳು. ಇವರ ಹವ್ಯಾಸಗಳು ಹಲವಾರು. ಕೈಹಿಡಿದು ಕವಯಿತ್ರಿ ಎಂಬ ಹೆಸರು ತಂದುಕೊಟ್ಟಿದ್ದು ಮಾತ್ರ ಸಾಹಿತ್ಯ. ಕಾಲೇಜು ದಿನಗಳಿಂದಲೂ ಬರೆಯುವ ಹವ್ಯಾಸ ಈಗ ಕಥೆ, ಕವನ, ಲೇಖನ, ಚುಟುಕು, ಹಾಸ್ಯ ಪ್ರಕಾರದ ಬರವಣಿಗೆ ಕೈಹಿಡಿದಿದೆ. ಅನೇಕ ಕವಿ ಮನಗಳ ಪ್ರೋತ್ಸಾಹ ಸಹಕಾರದಿಂದಾಗಿ "ಮನದನಿಯ ಚಿತ್ತಾರ" ಎಂಬ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿನಯವಾಣಿ ಪತ್ರಿಕೆಯಲ್ಲಿ 'ಸಸ್ಯಸತ್ವ' ಎಂಬ ವಾರದ ಅಂಕಣ ಬರಹಗಾರ್ತಿ. ಜೊತೆಗೆ ಎರಡು ಹಾಸ್ಯ ನಾಟಕಗಳನ್ನು ಬರೆದು ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ನಟಿಸಿದ್ದರೆ. ರಂಗೋಲಿ ಬಿಡಿಸುವುದು ಚಿತ್ರಕಲೆ ಹವ್ಯಾಸ, ಕೈತೋಟದಲ್ಲಿ ಆಸಕ್ತಿ, ನಿರೂಪಣೆ, ಸಮಯ ಸಿಕ್ಕಾಗ ಉಡುಗೆಗಳನ್ನು ಸಿದ್ಧಪಡಿಸುವುದು, ಉಡುಗೆಗಳಿಗೆ ಕಸೂತಿ ಕೆಲಸ, ಸಂಗೀತದಲ್ಲಿ ಆಸಕ್ತಿ.

ದರ್ಶಿನಿ ಪ್ರಸಾದ್

(12 Dec 1982)