ಮನದನಿಯ ಚಿತ್ತಾರ

Author : ದರ್ಶಿನಿ ಪ್ರಸಾದ್

Pages 124

₹ 120.00




Year of Publication: 2021
Published by: ಸುಖಿ ಸೃಷ್ಟಿ ಪ್ರಕಾಶನ
Address: #78/2/1/ 21ನೇ ಅಡ್ಡ ರಸ್ತೆ, ನಿಸರ್ಗ ಬಡಾವಣೆ, ರಾಜರಾಜೇಶ್ವರಿ ನಗರ, ಬೆಂಗಳೂರು- 560098,
Phone: 9449129757

Synopsys

‘ಮನದನಿಯ ಚಿತ್ತಾರ’ ಕೃತಿಯು ದರ್ಶಿನಿ ಪ್ರಸಾದ್ ಅವರ ಕವನಸಂಕಲನವಾಗಿದೆ. ವರ್ಣಮಾಲೆಯ `ಅ’ ದಿಂದ `ಸ’ ದವರೆಗಿನ ಪ್ರತೀ ಅಕ್ಷರದಿಂದಲೂ ಪ್ರಾರಂಭಿಸಿದ ಗುಣಿತಾಕ್ಷರದ ಕವನಗಳನ್ನು ರಚಿಸಿದ್ದು ಕವನಗಳ ಪ್ರತೀ ಸಾಲುಗಳಲ್ಲೂ ವಿಶಿಷ್ಟ ಪದಪ್ರಯೋಗಗಳೊಂದಿಗೆ ಬದುಕಿನ ಏಳು, ಬೀಳುಗಳು, ಸುಖ, ದುಃಖ, ಸಾಧನೆಯ ಪಥದಲ್ಲಿ ಬರುವ ಅಡ್ಡಿ ಆತಂಕಗಳನ್ನು ಹೇಗೆ ನಿವಾರಿಸಿಕೊಂಡು ಮುನ್ನುಗ್ಗಿ ಜಯ ತಮ್ಮದಾಗಿಸಿಕೊಳ್ಳಬೇಕು ಎಂಬ ಸಮಗ್ರ ಚಿಂತನೆಗಳೇ ಪ್ರತಿಬಿಂಬಿಸಿ ಬಹಳ ಅರ್ಥಪೂರ್ಣವಾಗಿ ಓದುಗರ ಮನಸೂರೆಗೊಂಡಿರುವುದಲ್ಲದೇ ಲೇಖಕಿ ಪ್ರೇಮ ಪ್ರಶಾಂತ್ ಅವರು ವ್ಯಕ್ತಿಗತವಾಗಿ ಎಷ್ಟು ಸರಳ ಸಜ್ಜನಿಕೆಯ ಮಹಿಳೆ ಎಂಬುದನ್ನು ನಿರೂಪಿಸುತ್ತದೆ. ಜೀವನ ಮೌಲ್ಯಗಳನ್ನು ಒಳಗೊಂಡು ದುಗುಡ ತುಂಬಿದ ಮನಸ್ಸಿಗೂ ಹೊಸ ಹುರುಪು, ಉಲ್ಲಾಸ ನೀಡಿ ಬದುಕು ನಾವಂದುಕೊಂಡಂತಿಲ್ಲ ಮತ್ತೇನೋ ಇದೆ ನಾವದನ್ನು ಅರಸಬೇಕು, ಅನ್ವೇಷಿಸಬೇಕು ಎನ್ನುವ ತುಡಿತ ಮೂಡಿಸಿ ಇಲ್ಲ ಇದರ ಹೊರತಾದ ಒಳ್ಳೆಯದನ್ನು, ಸದ್ಚಿಂತನೆಗಳಿಗೆ ಮನಸಲ್ಲಿ ಜಾಗ ಕೊಟ್ಟಾಗ ಎಲ್ಲವೂ ಸುಂದರ, ಹಾಗೂ ಸರಳವಾಗಿ ಕಾಣುತ್ತದೆ ಎಂಬ ಆಶಾ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಲ್ಲಿಯೂ, ಯಾವುದೇ ಸಾಲಿನಲ್ಲಿಯೂ ನಕಾರಾತ್ಮಕತೆ ಗೋಚರಿಸದೆ ಕೇವಲ ಆಶಾಭಾವ, ಸಾಕಾರಾತ್ಮಕ ವಿಚಾರ ಧಾರೆಗಳೊಂದಿಗೆ ಎಲ್ಲಾ ಬರಹಗಳೂ ಸಂದೇಶಪೂರ್ಣವಾಗಿವೆ.

About the Author

ದರ್ಶಿನಿ ಪ್ರಸಾದ್
(12 December 1982)

ದರ್ಶಿನಿ ಪ್ರಸಾದ್ ಹುಟ್ಟೂರು ಸಕಲೇಶಪುರ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆ.‌ ಪತಿ ರಘು ಪ್ರಸಾದ್. ಸುಖಿ, ಸೃಷ್ಟಿ ಮಕ್ಕಳು. ಇವರ ಹವ್ಯಾಸಗಳು ಹಲವಾರು. ಕೈಹಿಡಿದು ಕವಯಿತ್ರಿ ಎಂಬ ಹೆಸರು ತಂದುಕೊಟ್ಟಿದ್ದು ಮಾತ್ರ ಸಾಹಿತ್ಯ. ಕಾಲೇಜು ದಿನಗಳಿಂದಲೂ ಬರೆಯುವ ಹವ್ಯಾಸ ಈಗ ಕಥೆ, ಕವನ, ಲೇಖನ, ಚುಟುಕು, ಹಾಸ್ಯ ಪ್ರಕಾರದ ಬರವಣಿಗೆ ಕೈಹಿಡಿದಿದೆ. ಅನೇಕ ಕವಿ ಮನಗಳ ಪ್ರೋತ್ಸಾಹ ಸಹಕಾರದಿಂದಾಗಿ "ಮನದನಿಯ ಚಿತ್ತಾರ" ಎಂಬ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿನಯವಾಣಿ ಪತ್ರಿಕೆಯಲ್ಲಿ 'ಸಸ್ಯಸತ್ವ' ಎಂಬ ವಾರದ ಅಂಕಣ ಬರಹಗಾರ್ತಿ. ಜೊತೆಗೆ ಎರಡು ಹಾಸ್ಯ ನಾಟಕಗಳನ್ನು ಬರೆದು ಮಹಿಳಾ ಸಂಘದ ...

READ MORE

Related Books