About the Author

ಲೇಖಕ ಡಾ. ಧನವಂತ ಹಾಜವಗೋಳ (ಡಿ.ಜಿ. ಹಾಜವಗೋಳ) ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದವರು. ಎಂ.ಎ, ಎಂ.ಫಿಲ್, ಪಿ ಎಚ್. ಡಿ ಹಾಗೂ ಬಿ.ಇಡಿ ಪದವೀಧರರು. ಮುಳಗುಂದ ನಾಡು: ಒಂದು ಅಧ್ಯಯನ-ಇವರ ಪಿಎಚ್.ಡಿ. ಮಹಾಪ್ರಬಂಧ. ಪ್ರಸ್ತುತ, ಕರ್ನಾಟಕ ವಿಶ್ವ ವಿದ್ಯಾಲಯದ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರು.

ಕೃತಿಗಳು: ಆಯಗಾರರು ಮತ್ತು ಜಾಗತೀಕರಣ (ಸಂಪ್ರಬಂಧಗಳ ಸಂಕಲನ), ಮುಳಗುಂದ ನಾಡು: ಒಂದು ಅಧ್ಯಯನ (ಪಿಎಚ್.ಡಿ. ಮಹಾಪ್ರಬಂಧ), ಶೋಧ-ಪ್ರತಿಶೋಧ (ಸಂಶೋಧನಾ ಪ್ರಬಂಧಗಳು), ವಿರಾಟ ಪರ್ವ: ಸಾಂಸ್ಕೃತಿಕ ನೆಲೆ, ಪುಸ್ತಕಾವಲೋಕನ (ಲೇಖನಗಳ ಸಂಗ್ರಹ ಕೃತಿ) ಕಂಗಳ ಅಳತೆ (ಲೇಖನಗಳ ಸಂಗ್ರಹ ಕೃತಿ). ಸಂಶೋಧನಾ ಸೌಗಂಧ (ಸಂಶೋಧನಾ ಲೇಖನಗಳ ಸಂಗ್ರಹ). 

ಧನವಂತ ಹಾಜವಗೋಳ