About the Author

ಯುವ ಬರೆಹಗಾರ, ಬಹುಮುಖ ಪ್ರತಿಭೆ ದೀವಿತ್ ಎಸ್. ಕೋಟ್ಯಾನ್ ಪೆರಾಡಿ ಮೂಲತಃ ಮಂಗಳೂರಿನವರು. ಮಂಗಳೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಪ್ರಥಮ ಬ್ಯಾಂಕ್ ಪಡೆದವರು. ಜತೆಗೆ ಎಂ.ಎ. ಕನ್ನಡ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಕನ್ನಡ ಉಪನ್ಯಾಸರಾಗಿದ್ದಾರೆ. ಜತೆಗೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗಾನ ಗುರುವಾಗಿಯೂ ಕೆಲಸ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಉಲ್ಲೇಖವಾದ ಪದ್ವಿನಿ ಪ್ರಕರಣಾಧಾರಿತ 'ಪದ್ವಿನಿ ಪದಗ್ನತಿ' ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಯಕ್ಷಗಾನ ಏಕವ್ಯಕ್ತಿ ಪ್ರದರ್ಶನಗಳನ್ನೂ ಕೊಡುತ್ತಾರೆ. ‘ಕವಿಯ ಕನಸು', 'ಸ್ನೇಹ ಸಂಪಿಗೆ', 'ಕಾವ್ಯಾಮೃತ', 'ಮಂಟಪ ಪ್ರಭಾಕರ ಉಪಾಧ್ಯಾಯ' ಅವರ ಪ್ರಮುಖ ಕೃತಿಗಳು. 

ದಿವೀತ್ ಎಸ್.ಕೆ ಪೆರಾಡಿ

Stories/Poems