About the Author

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ವೈಜಕೂರು ಗ್ರಾಮದಲ್ಲಿ ಲೇಖಕಿ ಡಾ. ಶಾಲಿನಿ ವಿ.ಎಲ್. ಅವರು 11 ಏಪ್ರಿಲ್ 1991 ರಲ್ಲಿ ಜನಿಸಿದರು. ಆದರೆ, ಬೆಳೆದಿದ್ದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ. ಹಾಸನದಲ್ಲಿ ಎಂಬಿಬಿಎಸ್‌ ಪದವಿ ನಂತರ ಅನ್ನಾಮಲೈ ಯೂನಿವರ್ಸಿಟಿ, ಚಿದಂಬರಂನಿಂದ ಡಿಪಿಎಚ್‌ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯ ಫಲವಾಗಿ ’ಸಹನಾ- ಆದರ್ಶಗಳೊಂದಿಗೆ ಜೀವನ’ ಹಾಗೂ ’ಅನರ್ಘ್ಯ ರತ್ನ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ, ಅವರ ಸಾಹಿತ್ಯ ಸೇವೆಗೆ 2019 ನೇ ಸಾಲಿನ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬೇಲೂರು ತಾಲ್ಲೂಕು ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಶಾಲಿನಿ. ವಿ. ಎಲ್‌

(10 Apr 1991)