About the Author

ಗ.ನಾ. ಭಟ್ಟರು ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಓಣಿಕೈಯವರು, ಇವರು ಸಂಸ್ಕೃತ ವಿದ್ವತ್ತು ಮತ್ತು ಸಂಸ್ಕೃತದಲ್ಲಿ ಎಂ.ಎ. ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ. ಮೂವತ್ತೊಂದು ವರ್ಷಗಳ ಕಾಲ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಬೋಧಕರಾಗಿ, ಸಹಾಯಕ ಸಂಶೋಧಕರಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ.

'ಯಕ್ಷ ಕೌಮುದೀ ಟ್ರಸ್ಟ್' ಮತ್ತು 'ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ'ಯ ಕರ್ಣಧಾರತ್ವದೊಂದಿಗೆ ಬರಹ, ಚಿಂತನೆ, ವಿಮರ್ಶೆ, ಭಾಷಣ, ಉಪನ್ಯಾಸ, ಪ್ರವಚನ, ಸಂಘಟನೆ, ತಾಳಮದ್ದಳೆ ಅರ್ಥಗಾರಿಕೆ, ಅಂಕಣ ಬರಹ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಪ್ಪತ್ತು ಕೃತಿಗಳ ಲೇಖಕ. 'ಸನಾತನ ಸಭೆ'ಯ 'ಪ್ರವಚನ ಭಾಸ್ಕರ' ಮತ್ತು ಇನೋವೇಟಿವ್ ಸಂಸ್ಥೆಯ ಅಭಿನಂದನೆಯೊಂದಿಗೆ ಅನೇಕ ಸಂಘ-ಸಂಸ್ಥೆಗಳಿಂದ ಗೌರವ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. 'ನಾನು ಕೌಸಲ್ಯ'  ಗ.ನಾ. ಭಟ್ಟರ ಮೊದಲ ಕಾದಂಬರಿಯಾಗಿದೆ. 

ಕೃತಿ: ನಾನು ಕೌಸಲ್ಯ

ಗ.ನಾ.ಭಟ್ಟ