About the Author

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆಯವರಾದ ಗಣೇಶ ಹೊಸ್ಮನೆ ಕೃಷಿಕರು. ಬದುಕಿನನುಭವದಲ್ಲಿ ಅದ್ದಿತೆಗೆದ ಹಾಗೆ ಬರೆವ ಗಣೇಶ್ ಅವರು ಕವಿತೆಯನ್ನೇ ಉಸಿರಾಡಿಕೊಂಡಿರುವವರು. ಅವರ ಮೊದಲ ಕವನ ಸಂಕಲನ ಯಾರೂ ನೆಡದ ಮರ. ಈ ಸಂಕಲನಕ್ಕೆ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಪ್ರಶಸ್ತಿಗಳು ಸಂದಿವೆ. ಅವರ ಮತ್ತೊಂದು ಗಜಲ್ ಸಂಕಲನ ಹರಿದು ಕೂಡುವ ಕಡಲು ಪ್ರಕಟಗೊಂಡಿದೆ 

ಗಣೇಶ ಹೊಸ್ಮನೆ