About the Author

ಲೇಖಕ ಹಂ.ಗು. ರಾಜೇಶ್ ಮೂಲತಃ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಹೋಬಳಿಯ  ಹಂದಲಗೆರೆ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಬಿ.ಎಡ್ ಪದವೀಧರರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ತರಗತಿ ಕುರಿತು ಡಿಪ್ಲೊಮಾ ಪದವೀಧರರು.ಪ್ರಸ್ತುತ ಬೆಂಗಳೂರು ದಕ್ಷಿಣ ತಾಲೂಕು ದೊಡ್ಡೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿಗಾಗಿ ಸಂಶೋಧನೆ ಮಾಡುತ್ತಿದ್ದಾರೆ. ಪ್ರಥಮ ಪಿ.ಯು.ಸಿ. ಮತ್ತು 6-7ನೇ ತರಗತಿಗಳ ಇತಿಹಾಸ ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಗಳಲ್ಲಿ ಸದಸ್ಯರಾಗಿದ್ದರು. 

ಇತಿಹಾಸ ಸಂಶೋಧನೆ ಮತ್ತು ಪುರಾತತ್ತ್ವ ಅಧ್ಯಯನ ಇವರ ಆಸಕ್ತ ಕ್ಷೇತ್ರಗಳು. 'ಇತಿಹಾಸ ದರ್ಪಣ' ತ್ರೈಮಾಸಿಕದ ಸಂಸ್ಥಾಪಕ ಸಂಪಾದಕರು. 'ಇತಿಹಾಸ -2', 'ಮೌನಕ್ರಾಂತಿ: ಸಮಕಾಲೀನ ಪ್ರತಿಕ್ರಿಯೆಗಳು'-ಸ್ವತಂತ್ರ ಕೃತಿಗಳು. 20ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ 'ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು' ಯೋಜನೆಯಡಿ 12 ಸಂಪುಟಗಳ ಉಪಸಂಪಾದಕರಾಗಿದ್ದರು. 

ಹಂ.ಗು.ರಾಜೇಶ್