About the Author

ಲೇಖಕ ಹನಿಯೂರು ಚಂದ್ರೇಗೌಡ ಮೂಲತಃ ಚನ್ನಪಟ್ಟಣದವರು. ಬಿಎಡ್., ಎಂ.ಎ., ಎಂ.ಫಿಲ್., ಪಿಎಚ್ಡಿ., ಡಿ.ಲಿಟ್., ಪಿಜಿಡಿಟಿಎಚ್. ಪದವೀಧರರು. ಕರ್ನಾಟಕ ಬುಡಕಟ್ಟು ಪರಿಷತ್ತಿನ ಸಂಸ್ಥಾಪಕರೂ, ಬರಹಗಾರ, ನಟ, ರೇಡಿಯೋ ಜಾಕಿ, ಸಂದರ್ಶಕರೂ ಹೌದು. ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಜಾನಪದ, ಅಲೆಮಾರಿ ಬುಡಕಟ್ಟು,ಸೋಲಿಗ, ಮಲೆ ಕುಡಿಯ, ಜೇನು ಕುರುಬ, ಕಾಡು ಗೊಲ್ಲ, ಹಂದಿ ಜೋಗಿ, ಸುಡುಗಾಡು ಸಿದ್ಧ, ದೊಂಬ್ಬ, ಹಕ್ಕಿ ಪಿಕ್ಕಿ, ದುರ್ಗ ಮುರ್ಗಿ, ಬುಡುಬುಡಿಕೆ, ಕೋಲೆ ಬಸವ ಹೀಗೆ ವಿವಿಧ ಬಡಕಟ್ಇಟ ಸಮೂಹಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಕಿರುತೆರೆ ಚಿತ್ರಗಳಲ್ಲೂ ನಟಿಸಿದ್ದಾರೆ.

ಕೃತಿಗಳು: ವಿಚಾರ ವಿಹಾರ (ಸಂಪಾದನೆ)

ಪ್ರಶಸ್ತಿ-ಪುರಸ್ಕಾರಗಳು: ರಾಷ್ಟ್ರೀಯ ಯುವ ಕೆಂಪೇಗೌಡ ಪ್ರಶಸ್ತಿ -2017, ರಾಜ್ಯ ಮಟ್ಟದ ಕರುನಾಡ ರತ್ನ ಪ್ರಶಸ್ತಿ ಲಭಿಸಿವೆ.

ಹನಿಯೂರು ಚಂದ್ರೇಗೌಡ