About the Author

ಪತ್ರಕರ್ತ ಹರೀಶ್‌ ಕೇರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ. ಕಲಿತದ್ದು ಸಿವಿಲ್‌ ಇಂಜಿನಿಯರಿಂಗ್‌. ಹೊಸದಿಗಂತ, ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಭಾನುವಾರದ ಪುರವಣಿಗಳ ಮುಖ್ಯಸ್ಥರಾಗಿ, ವಿಜಯಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ವಿಸ್ತಾರ ನ್ಯೂಸ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಪತ್ರಕರ್ತ; ಆದರೆ ಹೃದಯದಲ್ಲಿ ಕತೆ, ಕವಿತೆಗಳಿವೆ. ‘ನಕ್ಷತ್ರ ನೇಯುವ ಹಕ್ಕಿಗಳು’ ಅವರ ಕವನ ಸಂಕಲನ.

ಹರೀಶ್‌ ಕೇರ