About the Author

ಬರಹಗಾರ್ತಿ ಹೇಮಮಾಲಾ ಬಿ. ಅವರು ಕೇರಳದ ಕಾಸರಗೋಡಿನಲ್ಲಿ 1970ರಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರೆ. ಮೈಸೂರಿನಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಎರಡು ದಶಕಗಳ ಕಾಲ ಕೆಲಸ ನಿರ್ವಹಿಸಿ 2015ರಲ್ಲಿ ಸ್ವಯಂನಿವೃತ್ತಿ ಪಡೆದು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.

ಚಾರಣ, ಪ್ರವಾಸ ಹಾಗೂ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರಗಳು. 'ಸುರಹೊನ್ನೆ' ಎಂಬ ಇ-ಪತ್ರಿಕೆಯನ್ನು ನಿರ್ವಹಿಸುತ್ತಿದ್ದು ಅವರ ಹಲವಾರು ಬರಹಗಳು ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ಸುಧಾ, ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಹಿಮಾಲಯದ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಬರೆದ ಪ್ರವಾಸ ಕಥನ 'ಚಾರ್ ಧಾಮ್' ಅವರ ಮೊದಲ ಕೃತಿ. ‘ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ.

ಹೇಮಮಾಲಾ ಬಿ.