About the Author

ಇರ್ಷಾದ್ ಉಪ್ಪಿನಂಗಡಿ ಅವರ ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಕನ್ನಡದ ವಿವಿಧ ಟಿವಿ ವಾಹಿನಿಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಜಯ ಕರ್ನಾಟಕ ಡಿಜಿಟಲ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

‘ಸ್ವರ್ಗದ ಹಾದಿಯಲ್ಲಿ’ ಇರ್ಷಾದ್ ಅವರ ಮೊದಲ ಕೃತಿ ಹಾಗೂ ‘ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು’ ಮೊದಲ ಸಾಕ್ಷ್ಯಚಿತ್ರ. ರಾಜಕೀಯ ವರದಿಗಾರಿಕೆಯ ಜೊತೆಗೆ ಸಮಾಜದ ಆಗುಹೋಗುಗಳ ಕುರಿತಾಗಿ ಲೇಖನ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಇರ್ಷಾದ್ ಉಪ್ಪಿನಂಗಡಿ