About the Author

ಜಗನ್ನಾಥ ಕಮಲಾಪುರೆಯವರು ಎಂ.ಎ, ಎಂ.ಎಡ್. ಎಂ.ಫಿಲ್ ಹಾಗೂ ಪಿ.ಜಿ.ಡಿ.ಎಚ್.ಇ ಪದವಿಧರರು. ವೃತ್ತಿಯಿಂದ ಉಪನ್ಯಾಸಕರಾಗಿದ್ದು ಪ್ರವೃತ್ತಿಯಿಂದ ಸಾಹಿತಿ ಹಾಗೂ ರಂಗ ಕಲಾವಿದರು. ಅಕ್ಷರ ಕಾರಂಜಿ ಪ್ರಾತಿನಿಧಿಕ ಕವನ ಸಂಕಲನ ಸಂಪಾದಕರಾಗಿದ್ದು, ಜಾನಪದ ವಿದ್ವಾಂಸ ಡಾ. ರಾಜೇಂದ್ರ ಯರನಾಳೆ ಅವರ ಮೊದಲ ಕೃತಿಯಾಗಿದ್ದು ಸಾಂದರ್ಭಿಕವಾಗಿ ಅನೇಕ ಲೇಖನಗಳು ಪ್ರಕಟವಾಗಿವೆ. ಹಲವಾರು ವಿಚಾರ ಸಂಕಿರ್ಣಗಳಲ್ಲಿ ಪ್ರಬಂಧ ಮಂಡಿಸಿದ್ದು ಅನೇಕ ಸಾಹಿತ್ಯ ಸಮ್ಮೇಳನಗಳÀಲ್ಲಿ ಸಹಭಾಗಿತ್ವ ಪಡೆದಿದ್ದಾರೆ. ವಿದ್ಯಾರ್ಥಿ ದೆಶೆಯಿಂದಲೆ ರಂಗಾಸಕ್ತಿ ಇದ್ದ ಕಾರಣ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸಧ್ಯ ಬೀದರನ ಕರ್ನಾಟಕ ಶಿಕ್ಷಣ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಗನ್ನಾಥ ಕಮಲಾಪುರೆ

(01 Jun 1970)