About the Author

ಜಿಯಾಉಲ್ಲಾ ಕೆ ಹೊಸಹಳ್ಳಿ ಅವರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ‌ ಕೊಕ್ಕರೆಹೊಸಹಳ್ಳಿಯವರು. ತಂದೆ ಮಹಮ್ಮದ್ ದಸ್ತಗಿರ್ ಸಾಬ್, ತಾಯಿ-ಖುರ್ಷಿದ್ ಉನ್ನೀಸಾ ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಪೂರೈಸಿ. ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಸಂತೇಕೋಡಿಹಳ್ಳಿಯ ಶಾರದಾ ಪ್ರೌಢಶಾಲೆಯಲ್ಲಿ ಪಡೆದರು. ಬಿ.ಎಡ್ ಪದವಿಯನ್ನು ಆರ್.ವಿ ಶಿಕ್ಷಕರ ಮಹಾವಿದ್ಯಾಲಯದಲ್ಲೂ, ಎಂ.ಎ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಪ್ರಸ್ತುತ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಕನ್ನಡ ಭಾಷಾ ವಿಷಯ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು: ದೆಸೆಯಿಂದ

ಜಿಯಾಉಲ್ಲಾ ಕೆ ಹೊಸಹಳ್ಳಿ

(06 Mar 1982)