About the Author

ಕೆ.ಎಸ್. ಮರಿಯಯ್ಯ‌ ಸ್ವಾಮಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕೊರ ಟೀಕೆರೆಯವರು. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್‌ ಆಗಿದ್ದು, ಪ್ರವೃತ್ತಿಯಲ್ಲಿ ಕವಿಯಾಗಿ ತೊಡಗಿಸಿಕೊಂಡಿದ್ದಾರೆ. ಇವರ ಹಲವಾರು ಕವನಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳೂ ಬಂದಿವೆ. ʻತೆರೆದ ಕಿಟಕಿʼ ಕವನ ಸಂಕಲನದ ಕೆಲವು ಕವನಗಳು ತಮಿಳು ಭಾಷೆಗೆ ಅನುವಾದಗೊಂಡಿವೆ. ಮರಿಯಯ್ಯ‌ ಅವರು ಕಟ್ಟಿದ ʻಅನ್ನಪೂರ್ಣ ಪ್ರತಿಷ್ಠಾನʼದಿಂದ ʻನಾಟಿ ಬೀಜʼ ಸಾಕ್ಷ್ಯಚಿತ್ರ, ನಾಡಿನ ಅಭಿವೃದ್ದಿಗೆ ಕೊಡುಗೆ ನೀಡಿದವರಿಗೆ ʻಸಂಪೂರ್ಣ ಪ್ರಶಸ್ತಿʼ ಮುಂತಾದ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದೆ.

ಕೃತಿಗಳು: ತೆರೆದ ಕಿಟಕಿ (ಹನಿಗವಿತೆಗಳ ಸಂಕಲನ)

ಕೆ.ಎಸ್. ಮರಿಯಯ್ಯ‌ ಸ್ವಾಮಿ