About the Author

ಲೇಖಕ, ಅನುವಾದಕ ಕೆ. ಶ್ರೀನಾಥ್ ಕೈಗಾರಿಕೋದ್ಯಮಿಯಾಗಿದ್ದವರು, ಸದ್ಯ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ನಾಡಿಮಿಡಿತ' ಇವರ ಮೊದಲ ಕಾದಂಬರಿ. ಸಾಹಿತ್ಯಕವಾಗಿ ಮಾತ್ರವಲ್ಲದೇ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಶ್ರೀನಾಥ್ ಅವರು ಅನೇಕ ಧಾರಾವಾಹಿ ಹಾಗೂ ಸಿನೆಮಾಗಳಲ್ಲಿಯೂ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಆಕ್ರಮಣ ಇವರು ನಟಿಸಿದ ಮೊದಲ ಚಿತ್ರ. ಶ್ರೀನಾಥ್ ಅವರ ಮೊದಲ ಕೃತಿ ಇಂಗ್ಲೀಷ್ ಕಾದಂಬರಿ Souls od Samaritans. ಈ ಕೃತಿಯನ್ನು ಪೆಂಗ್ವಿನ್ ಅಂಗಸಂಸ್ಥೆಯಾದ ಪಾರ್ಟ್ರಿಡ್ಜ್ ಪ್ರಕಟಿಸಿದೆ. ಅನುವಾದಕರಾಗಿ ಪರ್ಲ್ ಎಸ್, ಬಕ್ ಅವರ ಗುಡ್ ಅರ್ತ್, ಮತ್ತು ಸ್ಪಾನಿಶ್ ನ ಮಾರ್ಕೋಸ್ ಅವರ ಗುಂತರ್ಸ್ ವಿಂಟರ್ ಕಾದಂಬರಿಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಜೊತೆಗೆ ರಷ್ಯಾ ಕಾದಂಬರಿಕಾರ ಫ್ಯೋದೊರ್ ದಾಸ್ತೋವ್ ಸ್ಕಿ ಅವರು ಬರೆದ ಕಾದಂಬರಿ-ದಿ. ಬ್ರದರ್ಸ್ ಕರಮಜೋವ್ ಕಾದಂಬರಿಯನ್ನು ‘ಕರಮಜೋವ್ ಸಹೋದರರು’ ಶೀರ್ಷಿಕೆಯಡಿ ಕನ್ನಡೀಕರಿಸಿದ್ದಾರೆ.

ಕೆ. ಶ್ರೀನಾಥ