About the Author

ಕೆ. ಶ್ರೀಕರ ಭಟ್ ಮರಾಠಯವರು ಕಾರ್ಕಳ ತಾಲೂಕಿನ ಇದು ಗ್ರಾಮದವರು. ಅವರು ನಲುವತ್ತು ವರ್ಷಗಳ ಕಾಲ ಪತ್ರಕರ್ತರಾಗಿ ದುಡಿದು, ಈಗ ಸ್ವಯಂನಿವೃತ್ತಿ ಪಡೆದು ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಕೃಷಿಕರಾಗಿದ್ದಾರೆ. ನವಭಾರತ, ಉದಯವಾಣಿ, ಪ್ರಜಾವಾಣಿ, ವಿಶಾಲ ಕರ್ನಾಟಕ ಮತ್ತು ಕನ್ನಡ ಪ್ರಭ' ದೈನಿಕಗಳಲ್ಲಿ; ಪ್ರಜಾಪ್ರಭುತ್ವ ಹಾಗೂ ಕರ್ಮವೀರ ವಾರಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಮತ್ತು ಸಹಸಂಪಾದಕರಾಗಿ ದುಡಿದ ಅನುಭವ ಅವರಿಗಿದೆ. ಮದ್ರಾಸಿನಲ್ಲಿದ್ದ ಸೋವಿಯತ್ ಒಕ್ಕೂಟದ ವಾರ್ತಾ ಇಲಾಖೆಯಲ್ಲಿ ಭಾಷಾಂತರಕಾರ ಸಂಪಾದಕರಾಗಿ ಕೆಲಸ ಮಾಡಿದ್ದರು. ತಾಳಮದ್ದಳೆ ಕ್ಷೇತ್ರದಲ್ಲಿ ಅವರಿಗೆ ವಿಶೇಷ ಪರಿಶ್ರಮವಿದೆ. ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯೋಗ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಗೌರವ ಪುರಸ್ಕಾರ ಇತ್ಯಾದಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮರಾಠೆಯವರು ದೇರಾಜೆ ಸೀತಾರಾಮಯ್ಯ ಸಂಸ್ಕರಣ ಸಮಿತಿಯನ್ನು ಹುಟ್ಟುಹಾಕಿ ದೇರಾಜೆ ಸಂಸ್ಮರಣೆಯನ್ನು ಮಾಡುತ್ತಿದ್ದಾರೆ.

ಕೆ. ಶ್ರೀಕರ ಭಟ್ ಮರಾಠೆ