About the Author

 ಕೆ. ಉಮೇಶ ಆಚಾರ್ಯ ಗೇರುಕಟ್ಟೆ ಅವರು 1959ರಲ್ಲಿ ಜನಿಸಿದರು. ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದು, ಈಗ ನಿವೃತ್ತರು. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲೆಯ ಆರಾಧಕರು. ‘ಅರ್ಕುಳ ಸುಬ್ರಾಯ ಆಚಾರ್ಯರ’ ಜೀವನ ಚಿತ್ರಿತ ಕೃತಿಯನ್ನು ರಚಿಸಿದ್ದಾರೆ.

ಅವರಿಗೆ ಲಿಪಿಕ ನೌಕರರ ಸಂಘದ ರಾಜ್ಯ ಪ್ರಶಸ್ತಿ (1992), ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2003), ಜಿಲ್ಲಾಧಿಕಾರಿಗಳಿಂದ ಉತ್ತಮ ಅಧಿಕಾರಿ ಪ್ರಶಸ್ತಿ (2003) ಲಭಿಸಿವೆ. 

ಕೆ. ಉಮೇಶ ಆಚಾರ್ಯ