ಅರ್ಕುಳ ಸುಬ್ರಾಯ ಆಚಾರ್ಯ

Author : ಕೆ. ಉಮೇಶ ಆಚಾರ್ಯ

Pages 52

₹ 45.00




Year of Publication: 2015
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 102ನೇ ಪುಸ್ತಕ. ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಗಣನೀಯ ಸಾಧನೆ ಮಾಡಿ ’ಯಕ್ಷಗಾನ ಆಚಾರ್ಯ’ ಎಂಬ ಮನ್ನಣೆಗೆ ಪಾತ್ರರಾದ ಅರ್ಕುಳ ಸುಬ್ರಾಯ ಆಚಾರ್ಯ ಅವರನ್ನು ಕುರಿತ ಪರಿಚಯಾತ್ಮಕ ಕೃತಿ. 1930ರಲ್ಲಿ ಅಯ್ಯನಕಟ್ಟೆಯಲ್ಲಿ ನಡೆದ ಎರಡು ದಿನಗಳ ಯಕ್ಷಗಾನ ಸಮ್ಮೇಳನದಲ್ಲಿ ಮೇಲಿನ ಪ್ರಶಂಸೆ ಸಂದದ್ದು ಅರ್ಕುಳ ಸುಬ್ರಾಯ ಆಚಾರ್ಯರಿಗೆ (1885-1945). ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಅಂದಿನ ಜಿಲ್ಲಾ ವಿದ್ಯಾಧಿಕಾರಿಗಳಾಗಿದ್ದ ಮಂಗಳೂರಿನಲ್ಲಿ ನಡೆದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಆರ್. ತಾತಾಚಾರ್ಯ. ಅಂದು ನಡೆದ ತಾಳಮದ್ದಳೆಯ
ರಸಾಸ್ವಾದದಿಂದ ಆನಂದ ಪರವಶರಾದ ಅವರು ತಮ್ಮ ಪ್ರತಿಕ್ರಿಯೆಯನ್ನು ಕಂದಪದ್ಯಗಳಲ್ಲಿ ದಾಖಲಿಸಿದ್ದಾರೆ. ಈ 16 ಕಂದಪದ್ಯಗಳಲ್ಲಿ ಮೇಲೆ ಉದಾಹರಿಸಿದ ಪದ್ಯ ವಿಖ್ಯಾತ ಅರ್ಥಧಾರಿ, ಲೇಖಕ ಅರ್ಕುಳ ಸುಬ್ರಾಯ ಆಚಾರ್ಯರನ್ನು ಉದ್ದೇಶಿಸಿ ರಚಿಸಲಾಗಿತ್ತು. ಅದಾಗಲೇ
1927ರಲ್ಲಿ ‘ಕೃಷ್ಣ-ಸಂಧಾನ’ ಯಕ್ಷಗಾನ ಪ್ರಸಂಗಕ್ಕೆ ಸೊಗಸಾದ ಅರ್ಥವಿವರಣೆ ಬರೆದು ಪ್ರಕಟಿಸಿ ಖ್ಯಾತನಾಮರಾದ ಅರ್ಕುಳ ಸುಬ್ರಾಯ ಆಚಾರ್ಯರಿಗೆ ‘ಯಕ್ಷಗಾನ ಆಚಾರ್ಯ’ ಎಂಬ ಬಿರುದು ಕೊಡಲಾಯಿತು. ಸುಬ್ರಾಯ ಆಚಾರ್ಯರನ್ನು ಪರಿಚಯಿಸುವ ಕೃತಿಯಿದು.

 

About the Author

ಕೆ. ಉಮೇಶ ಆಚಾರ್ಯ

 ಕೆ. ಉಮೇಶ ಆಚಾರ್ಯ ಗೇರುಕಟ್ಟೆ ಅವರು 1959ರಲ್ಲಿ ಜನಿಸಿದರು. ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದು, ಈಗ ನಿವೃತ್ತರು. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲೆಯ ಆರಾಧಕರು. ‘ಅರ್ಕುಳ ಸುಬ್ರಾಯ ಆಚಾರ್ಯರ’ ಜೀವನ ಚಿತ್ರಿತ ಕೃತಿಯನ್ನು ರಚಿಸಿದ್ದಾರೆ. ಅವರಿಗೆ ಲಿಪಿಕ ನೌಕರರ ಸಂಘದ ರಾಜ್ಯ ಪ್ರಶಸ್ತಿ (1992), ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2003), ಜಿಲ್ಲಾಧಿಕಾರಿಗಳಿಂದ ಉತ್ತಮ ಅಧಿಕಾರಿ ಪ್ರಶಸ್ತಿ (2003) ಲಭಿಸಿವೆ.  ...

READ MORE

Related Books